Posts

ಒಂದು ಅಲಾರಾಂನ ಕಥೆ

Image
೨೦೧೨ ರ ಸೆಪ್ಟೆಂಬರ್ ತಿಂಗಳ ಒಂದು ದಿನ (ದಿನ‌ ಖಂಡಿತಾ ನೆನಪಿಲ್ಲ), ನಾನು ದ್ವಿತೀಯ ಪಿಯು ಆಳ್ವಾಸ್ ಕಾಲೇಜಿನಲ್ಲಿ ಓದುತ್ತಿದ್ದ ಸಮಯ. ಅಂದು ಸುಮಾರು ೧೨ ಗಂಟೆ ಮಧ್ಯಾಹ್ನ ಫಿಸಿಕ್ಸ್ ತರಗತಿ ನಡೆಯುತ್ತಿತ್ತು. ಕವಿತಾ ಮೇಡಮ್ ನಮ್ಮ ಟೀಚರ್, ಚೆನ್ನಾಗಿಯೇ ಪಾಠ‌ ಮಾಡುತ್ತಿದ್ದರು ಅಂತಿಟ್ಟುಕೊಳ್ಳಿ. ಅವರು ಪಾಠ ಮಾಡಿದ್ದು ಹಾಗೆಯೇ ಪ್ರಥಮ ಮತ್ತು ದ್ವಿತೀಯ ವರ್ಷದ ನಡುವಿನಲ್ಲಿ ನಡೆದ ಕ್ರಾಶ್ ಕೋರ್ಸ್ ಸಮಯದಲ್ಲಿ ತಿಳಿದ ಫಿಸಿಕ್ಸ್ ಬಗೆಗಿನ ಹಲವು ವಿಚಾರಗಳು ನನಗೆ ಫಿಸಿಕ್ಸ್ ನಲ್ಲಿ ಅತಿಯಾಗಿ ಆಸಕ್ತಿಯನ್ನು ಹೆಚ್ಚಿಸಿದ್ದವು‌‌. ಅದರಲ್ಲೂ ಪ್ರಮುಖವಾದವು ನ್ಯೂಕ್ಲಿಯರ್ ಫಿಸಿಕ್ಸ್, ಆಸ್ಟ್ರೋ ಫಿಸಿಕ್ಸ್ ಮತ್ತು ಇಲೆಕ್ಟ್ರೋಮ್ಯಾಗ್ನೆಟಿಸಂ.      ನಮ್ಮ‌ ಪಠ್ಯದ ಹೊರತಾಗಿಯೂ ಫಿಸಿಕ್ಸ್ ನ ಹಲವು ವಿಚಾರಗಳನ್ನು ತಿಳಿಯಲು ಮನಸ್ಸು ಹಾತೊರೆಯುತ್ತಿತ್ತು. ಇಂದಿಗೂ ನಾನು ಉತ್ಸಾಹದಿಂದ ಈ ವಿಷಯಗಳನ್ನು ಗಮನಿಸುತ್ತೇನೆ. ಇದೇ ಆಸಕ್ತಿ ದ್ವಿತೀಯ ಪಿಯು ಫಿಸಿಕ್ಸ್ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ತೆಗೆಯಲು ಸಾಧ್ಯವಾಯಿತು. ಅಂತೆಯೇ ಎಂಜಿನಿಯರಿಂಗ್ ನಲ್ಲಿ ಇಲೆಕ್ಟ್ರಿಕಲ್ ಆಯ್ಕೆ ಮಾಡಲೂ ಒಂದೆಡೆಯಿಂದ ಸ್ಪೂರ್ತಿಯಾಯಿತೆಂದರೆ ತಪ್ಪಲ್ಲ. ಆದರೆ ವಿದ್ಯಾರ್ಥಿಗಳೆಂದ ಮೇಲೆ ಬಹುತೇಕ ಎಲ್ಲರ ಮನೋಭಾವ ಒಂದೇ ಭಾವಿಸುತ್ತೇನೆ. ನಾವೆಲ್ಲಾ ಟೀಚರ್ಸ್ ನ ನೋಡೋದೇ ನಮ್ಮ ವಿರೋಧಿಗಳ ಹಾಗೆ, ಅವರು ನೋಟ್ಸ್ ಬರೀರಿ ಅಂದ್ರೂ ಕಷ್ಟ, ಆನ್ಸರ್ ಮಾಡು ಅಂದ್ರೂ ಕಷ್ಟ, ಇತ್ಯಾದಿ. ಆ

ಎಂ.ಎ ಕನ್ನಡ

೨೦೨೦ ರ ಫೆಬ್ರವರಿಯಲ್ಲಿ ಯುಪಿಎಸ್ಸಿ ಐಚ್ಚಿಕ ವಿಷಯವಾಗಿದ್ದ ಕನ್ನಡ ಸಾಹಿತ್ಯದ ಪಠ್ಯವೇ ಬಹುವಾಗಿದ್ದು ನನ್ನ ಓದಿನೊಂದಿಗೆ ಪೂರಕವಾಗಿರುತ್ತದೆಂದು ಭಾವಿಸಿ ತಮ್ಮನಿಂದ ಹಣ ಪಡೆದು ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಎಂ.ಎ. ಕನ್ನಡ ಪದವಿ ಸೇರಿಕೊಂಡೆ.             ಮುಂದೆ ಎಲ್ಲರೂ ತೊಡಗುವಂತೆ ಬಂದ ಮಹಾಮಾರಿಯ ಕೃಪಾಕಟಾಕ್ಷದಿಂದ ಪ್ರಥಮ ವರ್ಷದ ಪರೀಕ್ಷೆಗಳು ಸರ್ಕಾರದಿಂದ ರದ್ದುಗೊಂಡರೂ ವಿವಿಯು ತೆರೆದ ಪುಸ್ತಕ ಪರೀಕ್ಷೆ ನಡೆಸಿ ಫಲಿತಾಂಶ ನೀಡಿತು. ದ್ವಿತೀಯ ವರ್ಷದ ಪರೀಕ್ಷೆಗಳು ೨೦೨೨ರ ಎಪ್ರಿಲ್‌ನಲ್ಲಿ ನಡೆದವು, ಮಲ್ಲೇಶ್ವರಂನ ಕಾಲೇಜೊಂದರಲ್ಲಿ ಪರೀಕ್ಷೆ ಬರೆದದ್ದು, ೨೦೨೨ರ ಜುಲೈ ೨೨ರಂದು ಫಲಿತಾಂಶ ಪ್ರಕಟಗೊಂಡಿತು. ೭೨.೭% ಜೊತೆಗೆ ಪ್ರಥಮ ದರ್ಜೆಯಲ್ಲಿ ತೇರ್ಗಡೆಗೊಂಡಿದ್ದೆನು.           ಇದಾಗಿ ಕೆಲವೇ ದಿನಗಳಲ್ಲಿ ನಮ್ಮ ಗುಂಪಿನ ಹಿರಿಯರೊಬ್ಬರು ಕರೆಮಾಡಿ, ಕಾಲೇಜೊಂದರಲ್ಲಿ ಅಧ್ಯಾಪಕರ ಅಗತ್ಯವಿದ್ದು ಅರ್ಜಿ ಹಾಕುವಂತೆ ತಿಳಿಸಿದರು. ಅದು ವಾರಕ್ಕೆ ಎಂಟು ಗಂಟೆಯ ತರಗತಿಗಳು, ವಾರಕ್ಕೆ ಮೂರು ದಿನ ಹೋಗಿ ಬರಬೇಕಿತ್ತು. ನನಗೆ ಓದಲು ಸಮಯ ಉಳಿಯುವುದೆಂದು ನಾನು ಅರ್ಜಿ ಹಾಕಿದೆ. ಮುಂದೆ ಸೇರ್ಪಡೆಯಾಗಿ ಆಗಸ್ಟ್‌ ಕೊನೆಯ ವಾರದಿಂದ ತರಗತಿಗಳು ಆರಂಭವಾದವು. ತರಗತಿ-ಪರೀಕ್ಷೆ-ವೈವಾ ಹೀಗೆ ತರಗತಿಗಳು ಮುಗಿದದ್ದೇ ತಿಳಿಯಲಿಲ್ಲ.                        ಡಿಸೆಂಬರ್ ಮೊದಲ ವಾರ ವಿದ್ಯಾರ್ಥಿಗಳಿಗೆ ಪಾಠದ ಕೊನೆಯ ವಾರ, ಮುಂದಿನ ವಾರದಿಂದ ಆ ಸೆಮಿಸ

ಪೆಟ್ರೋಲ್ ಬಂಕು

ಮೊನ್ನೆ ಪೆಟ್ರೋಲ್ ಹಾಕಿಸಲು ಇಲ್ಲೇ ಹತ್ತಿರದ ಬಂಕ್ ಒಂದಕ್ಕೆ ಹೋಗಿದ್ದೆ. ಮುಂದೊಂದು ದೋಭಿಯವನ ಗಾಡಿಯೂ ನಿಂತಿತ್ತು, ಆದರೆ ಬಂಕಿನಾತ ನನ್ನನ್ನು ನೋಡಿದ ಕೂಡಲೇ ಕರೆದು ಎಷ್ಟು ಪೆಟ್ರೋಲ್ ಬೇಕೆಂದು ಕೇಳಿ‌ ನಾನು ಹೇಳಿದಂತೆ, ೧೦೦ ರೂಪಾಯಿಗೆ ಹಾಕಿದ ನಂತರ ಮೋದಲೇ ನಿಂತು ಕಾದಿದ್ದ ದೋಭಿಯವನಿಗೆ ೪೦೦ ರೂಪಾಯಿಗಳ ಪೆಟ್ರೋಲ್ ಹಾಕಿ ಕಳಿಸಿದ.           ಅರೇ, ಇದರಲ್ಲಿ ಏನು ವಿಶೇಷ ಅನ್ಕೊಂಡ್ರಾ? ಅಥವಾ ದೋಭಿಯವನನ್ನು ಬಿಟ್ಟು ನನ್ನ ಗಾಡಿಗೆ ಪೆಟ್ರೋಲ್ ಹಾಕಿದ್ದು‌ ಕೇಳಿ ನಾನೇನು ದೊಡ್ಡ ಮನುಷ್ಯ ಅಂದುಕೊಂಡ್ರಾ? ಅಲ್ಲೇ ಇರೋದು ಮಾತು...           ಸಾಮಾನ್ಯವಾಗಿ ಪೆಟ್ರೋಲ್ ಬಂಕ್ ಗಳಲ್ಲಿ ಎರಡು ಬಗೆಯ ಮೋಸ ನಾನು ಗಮನಿಸಿದ್ದೀನಿ. ಬಂಕಿನವರ ಈ ಕರಾಮತ್ತುಗಳು ನನಗೆ ಚಂದ್ರಾಲೇಔಟಿಗೆ ಬಂದ ಹೊಸತರಲ್ಲೇ ತಿಳಿಯಿತು. ಒಂದನೆಯದು, ಈ ರೀತಿ ಕಡಿಮೆ ಪೆಟ್ರೋಲ್ ಬೇಕಿರೋರಿಗೆ ಮೊದಲು ಹಾಕಿ ನಂತರ ಮೀಟರ್ ಜೀರೋ ಮಾಡದೇ ನಾನು ಹಾಕಿಸಿದ ೧೦೦ ರೂಗಳ ಮೇಲೆ ೨೦೦,೩೦೦,೪೦೦ ಹಾಕಿ ತೋರಿಸೋದು, ಇಲ್ಲಿ ದೋಭಿಗೂ ಅದೇ ಆಗಿತ್ತು.  ‌          ಎರಡನೆಯದು, ಉದಾಹರಣೆಗೆ ನಾನು ಐದು ನೂರು ನೋಟು ಕೊಟ್ಟು ನೂರು ರೂಪಾಯಿಗೆ ಪೆಟ್ರೋಲ್ ಹಾಕಿಸಿದೆ ಅಂತಿಟ್ಟುಕೊಳ್ಳಿ. ಬಂಕಿನವರು ಎಂತಾ ಖಿಲಾಡಿ ವಿದ್ಯೆ ಕಲಿತಿರ್ತಾರೆ ಅಂದ್ರೆ, ನೂರರ ಮೂರು ನೋಟನ್ನೆ ನಾಲ್ಕು ಎನ್ನುವ ರೀತಿ ನಮ್ಮ ಕಣ್ಣ ಮುಂದೆ ತಂದು ಎಣಿಸುತ್ತಾರೆ. ನೀವೇನಾದರೂ ನೋಡಿದೆನಲ್ಲಾ ನಾಲ್ಕು ನೋಟಿದೆ ಅಂತಾ ಜೇಬಿಗಿಳಿಸ

ತೊಣ್ಣೂರು ಕೆರೆಯ ಗೆಳೆತನ

Image
ಕಾಲೇಜು ಮುಗಿದು ಮೂರು ವರ್ಷದ ಬಳಿಕ ಮೈಸೂರಿಗೆ ಹಿಂದಿರುಗಿದಾಗ, ಸುಂದರ ತಾಣ ತೊಣ್ಣೂರು ಕೆರೆಗೂ ಹೋಗುವ ಮನಸಾಯಿತು. ಹಿಂದೊಮ್ಮೆ ಗೆಳೆಯರ ಜೊತೆ ಹೋಗಿದ್ದು ಆ ಸ್ಥಳ ಹಾಗೂ ಅಲ್ಲಿಯ ಸೂರ್ಯಾಸ್ತಮಾನ ನನ್ನ ಮನಸೂರೆಗೊಂಡಿತ್ತು.                     ಬೆಂಗಳೂರಿನಿಂದ ಬೆಳಗ್ಗೆ ನನ್ನ ಬೈಕ್ ನಲ್ಲೇ ಹೊರಟು ಮೈಸೂರು ತಲುಪಿದ್ದು ಮಧ್ಯಾಹ್ನದ ಹೊತ್ತಿಗೆ, ಕೆ.ಎಸ್.ಓ.ಯು ಹಾಸ್ಟೆಲ್ ನಲ್ಲಿ ತಂಗಲು ವ್ಯವಸ್ಥೆ ಆಗಿತ್ತು ಹೋಗಿ ವಿಶ್ರಾಂತಿ ತೆಗೆದುಕೊಂಡು ಸಂಜೆ ತೊಣ್ಣೂರು ಕೆರೆಗೆ ಹೋಗುವ ನಿರ್ಣಯ ಮಾಡಿದೆ. ನಿದ್ದೆಯಿಂದೆದ್ದು  ಹೊರಡುವುದು ಸ್ವಲ್ಪ‌ ಸಮಯವಾದ್ದರಿಂದ ಸೂರ್ಯಾಸ್ತದ ಸುಂದರ‌ ಚಿತ್ರಣ ಸಿಗುವುದೋ ಇಲ್ಲವೋ‌ ಎಂಬ ಭಯದಲ್ಲೇ ಹೊರಟೆ. ನಾನು ಅವತ್ತು ಬೈಕ್ ಓಡಿಸಿದ್ದು, ಮುಳುಗಲು ಹೋಗುತ್ತಿರುವ ಸೂರ್ಯನೊಂದಿಗೇ ರೇಸ್ ಹತ್ತಿದಂತಿತ್ತು.                     ಅಂತೂ ತಡವಾಗದೇ ಸಮಯಕ್ಕೆ ಸರಿಯಾಗಿ ತಲುಪಿದ್ದಾಯಿತು, ಸೂರ್ಯಾಸ್ತ ದರ್ಶನಕ್ಕೆ‌ ಅಡ್ಡಿಯಾಗುವಂತೆ‌ ಮೋಡಗಳಿದ್ದರಿಂದ ಅಷ್ಟೇನು ಸುಂದರವಾಗಿ ಕಾಣುತ್ತಿರಲಿಲ್ಲ, ಇದಕ್ಕೆ ಹಿಂದೆ ನಾನು ನೋಡಿದ ಅಮೋಘ ಸೂರ್ಯಾಸ್ತಮಾನದ ಸ್ಮರಣೆಯೇ ಕಾರಣ ಎಂದರೆ ತಪ್ಪಲ್ಲ.                    ಈ ಬಾರಿ‌ ಅಲ್ಲೊಂದು ಸಿನೆಮಾ‌ ಚಿತ್ರೀಕರಣ ನಡೆಯುತ್ತಿತ್ತು, ಆ ಗಿಜಿಗಿಜಿ ಯಲ್ಲಿ ಶಾಂತಿಯೆಲ್ಲಾ‌ ಕಳೆದು ಹೋಗಿತ್ತು. ಯಾವುದೋ ಊರಿಂದ ಬಂದ ತರುಣರ ಗುಂಪೊಂದನ್ನು ಬಿಟ್ಟರೆ ಯಾಕೋ ಬೇರೆ ಯಾವ ಜನರೂ ಇರಲಿಲ್ಲ. ಚಿ

ಪಾಪ ದೇವರು!!

ಹೀಗೆ ಹಿರಿಯ ಗೆಳೆಯರೊಬ್ಬರ ಜೊತೆ ಮಾರನೇ ದಿನ ಇದ್ದ ಪರೀಕ್ಷೆಯೊಂದರ ಬಗ್ಗೆ ಮಾತುಕತೆ ನಡೆಯುತ್ತಿತ್ತು. ಅವರು ಅದೇ ತಮ್ಮ ಜೀವನದ ನಿರ್ಣಾಯಕ ಪರೀಕ್ಷೆ ಅದರಲ್ಲಿ ಸೋತರೆ‌ ಜೀವನವೇ ಮುಗಿದಂತೆ‌ ಅನ್ನೋ ಪರೀಕ್ಷಾ ಭಯದಲ್ಲಿ ಮುಳುಗಿ, ಆರಾಮಾಗಿದ್ದ ನನಗೂ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದ್ದರು.   ನಾನು ವಿಚಲಿತನಾಗದೆ, ಸಮಚಿತ್ತದಿಂದ ಅವರೊಂದಿಗೆ ಸಂಭಾಷಣೆ ನಡೆಸುತ್ತಿದ್ದೆ. ಹಾಗೆಂದ ಮಾತ್ರಕ್ಕೆ ಎಲ್ಲವನ್ನೂ ಓದಿ ಮುಗಿಸಿ, ಅತೀವ ಆತ್ಮಸ್ಥೈರ್ಯದಿಂದ ಇದ್ದೆನೆಂದಲ್ಲ. ಮಾರನೇ ದಿನ ಇದ್ದ ಪರೀಕ್ಷೆ ನನಗೆ ಪ್ರಮುಖವಾಗಿರಲಿಲ್ಲ ಅದು ನನ್ನ  ಪರೀಕ್ಷೆಯಾಗಿತ್ತೆಂದರೆ ತಪ್ಪಲ್ಲ. ಹಾಗಾಗಿ ಆ ಪರೀಕ್ಷೆಗೆ ಕಟ್ಟಿದ್ದೆನೇ ಹೊರತು ಯಾವುದೇ ತಯಾರಿ ಮಾಡಿರಲಿಲ್ಲ. ಹೀಗೆ ಮಾತುಕತೆಯಲ್ಲಿ,  ಗೆಳೆಯರು: ನೀವಿಷ್ಟು ಆರಾಮಾಗಿದ್ದೀರಾ, ಎಲ್ಲವೂ ಮುಗಿಸಿದ್ದೀರಾ ಅನ್ಸುತ್ತೆ... ನಾನು: ಹಾಗೇನಿಲ್ಲ, ನಾಳೆ‌ ಪರೀಕ್ಷೆಯ ನನ್ನ ಎಲ್ಲಾ ಭಾರವನ್ನೂ ದೇವರ ಮೇಲೆ ಹಾಕಿ ಬಿಟ್ಟಿದ್ದೇನೆ ಹಾಗಾಗಿ ಚಿಂತೆಯಿಲ್ಲ. ಗೆಳೆಯರು: ಅಯ್ಯೋ! ಪಾಪ!! ದೇವರು!!! ನನಗೂ ಇಲ್ಲಿ ವಿಡಂಬನೆ ಅರಿಯಲು ಸ್ವಲ್ಪ ಸಮಯ ಬೇಕಾಯಿತು, ಆದರೆ ಆ ಭಯದಲ್ಲೂ ಅವರ ಹಾಸ್ಯಪ್ರಜ್ಞೆ ನನ್ನ ಮನಸೂರೆಗೊಳಿಸಿತು.

ಮಡಕೆ ಮೂತಿಯವ ಬಂದು ಹೋದಾಗ.....

Image
ಸೌಭಾಗ್ಯಪುರ ಅಂತ ಊರು, ಎಲ್ಲಾ ತಕ್ಕಮಟ್ಟಿಗೆ ಅನುಕೂಲಸ್ಥರೇ ಇದ್ರು. ಸುಮಾರು ಒಂದು ನೂರು ಮನೆಗಳಿದ್ವು. ಅದೇ ಊರವ್ರಂತೆ ಆದ್ರೆ ಒಂದ್ಹತ್ತು ಮನೆಗಳು ಊರಿಂದ ಸ್ವಲ್ಪ ದೂರದಲ್ಲಿ ಇದ್ವು. ರಾತ್ರಿ ಆದ್ರೆ ಊರಲ್ಲಿ ಬೀದಿನಾಟಕ, ಮುದುಕರ ಕಟ್ಟೆ, ಯುವಕರ ಗುಂಪು ಮನೆ ಮಾಡಿರ್ತಿದ್ವು. ಆದ್ರೆ ಅದ್ಯಾಕೋ ಊರಾಚೆಗಿದ್ದ ಮನೆಗಳು ಕತ್ತಲಾದ್ರೆ ತಟ್ಟನೆ ಮಾಯ ಆಗ್ತಾ ಇದ್ವು, ಏನೂ ಅಂತ ಗೊತ್ತಾಗ್ತಿರ್ಲಿಲ್ಲ.                        ಹೀಗೆ ಇದ್ದಾಗ ರಾತ್ರಿ ಸುರಿದ ಮಳೆಗೆ, ಸೋಮಣ್ಣನ ಮನೆ ಹಿಂದಿನ ಬಚ್ಚಲುಮನೆಗೆ ಹೊಂದಿಕೊಂಡಿದ್ದ ಚರಂಡಿ ಕಟ್ಟಿಕೊಂಡಿತ್ತು. ಆ ನೀರಿನೊಂದಿಗೆ ಬಂದು ನಿಂತಿದ್ದ ಎಲ್ಲಾ ಹೊಲಸನ್ನು ಆತ ನೋಡದಾದ, ಬಚ್ಚಲಿಗೆ ಹೋಗುವುದನ್ನೇ ನಿಲ್ಲಿಸಿ ಎಲ್ಲದಕ್ಕೂ ಮನೆಯವರೆಲ್ಲಾ ಬಯಲಿನ ಹಾದಿ ಹಿಡಿದ್ರು.                       ಅವತ್ತು ಬೆಳಿಗ್ಗೆ ಊರಿಂದ ಹೋದ ಸೋಮ ಇನ್ನು ಬಂದಿರಲಿಲ್ಲ. ಅಷ್ಟರಲ್ಲಿ ಯಾರೋ ಬಾರಿಸ್ತಿದ್ದ ಗಂಟೆ ಶಬ್ದ ಕೇಳ್ತಾ ಇತ್ತು. ರಾಮ ತನ್ನ ಗೆಳೆಯ ರಾಜೀವನಿಗೆ ಹೇಳ್ದಾ "ನೋಡೋ ನಮ್ ಶಾಲೆಗೆ ರಜೆ ಅಂತ ಗೊತ್ತಾಗಿ ಇವತ್ತೂ ಬಂದಿದಾನೆ ಐಸ್ ಕ್ಯಾಂಡಿ ಅವ್ನು", ಪ್ರತ್ಯುತ್ತರವಾಗಿ ರಾಜೀವ್ "ಯಾಕೋ ಗಂಟೆ ಶಬ್ದ ಬೇರೆ ಥರಾ ಇದ್ಯಲ್ಲಾ?!". ಅಷ್ಟರಲ್ಲಿ ರಾಜೀವನ ತಾಯಿ, "ಕಾಲು ಮುರಿತೀನಿ ಹೊರಗೆ ಕಾಲಿಟ್ರೆ, ನಾಳೆ ತಿನ್ನುವಂತ್ರಿ" ಅಂದವ್ಳೆ, ಸರಸರನೆ ಹೋಗಿ ಬಾಗಿಲು ದಡಾ

ಒಂಟಿತನವೊಮ್ಮೆ ಹೇಳಿತು

Image
ಒಂಟಿತನವೊಮ್ಮೆ  ಹೇಳಿತು ಎಲ್ಲರನೂ  ಕಾಡಲು ಯತ್ನಿಸಿದೆ ಆದರೆ, ನಿನಗಿಂತ ಏಕಾಂಗಿ ಎಲ್ಲೂ ಸಿಗಲಿಲ್ಲ ಅದಕ್ಕೇ ನಿನ್ನ ಬಳಿ ಉಳಿದೆ ಎಂದು!!